ಬಳ್ಳಾರಿ: ಕುರಿಗಾಹಿಯೊಬ್ಬರ ಮೇಲೆ ಕರಡಿಯೊಂದು ದಾಳಿ ಮಾಡಿ, ಕಣ್ಣು ಕಿತ್ತಿರುವ ಘಟನೆ ತಾಲ್ಲೂಕಿನ ಹಲಕುಂದಿ ಗ್ರಾಮದ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ತಾಲ್ಲೂಕಿನ ಕುರುಗೋಡು ನಿವಾಸಿ ಸಿದ್ಧಪ್ಪ ಗಾಯಗೊಂಡ ವ್ಯಕ್ತಿ. ಕುರಿಗಳನ್ನು ಮೇಯಿಸುತ್ತಿದ್ದ ಅವರ ಮೇಲೆ ಏಕಾಏಕಿ ಎರಗಿದ ಕರಡಿ ಮುಖವನ್ನು ಪರಚಿ, ಬಲಗಣ್ಣನ್ನು ಕಿತ್ತು ಪರಾರಿಯಾಗಿದೆ. ಗಾಯಾಳುವನ್ನು ಇಲ್ಲಿನ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.