ADVERTISEMENT

ನಾಲ್ವರು ವಿದ್ಯಾರ್ಥಿಗಳು ಕಣ್ಮರೆ

ಕಿಬ್ಬೆಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆಂದು ತೆರಳಿದ್ದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2017, 19:48 IST
Last Updated 23 ಆಗಸ್ಟ್ 2017, 19:48 IST

ಸೋಮವಾರಪೇಟೆ (ಕೊಡಗು ಜಿಲ್ಲೆ): ಸಮೀಪದ ಕಿಬ್ಬೆಟ್ಟ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸೋಮವಾರ ತೆರಳಿದ್ದ ನಾಲ್ವರು ವಿದ್ಯಾರ್ಥಿಗಳು ಕಣ್ಮರೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದ ಗಿರಿಜನ ಹಾಡಿಯ 5ನೇ ತರಗತಿ ವಿದ್ಯಾರ್ಥಿನಿ ದಿವ್ಯಾ (9), ಎರಡನೇ ತರಗತಿ ವಿದ್ಯಾರ್ಥಿಗಳಾದ ಸೂರ್ಯ (6), ಲಕ್ಷ್ಮಿ (6) ಮತ್ತು ಆಶಾ (7) ಕಾಣೆಯಾಗಿದ್ದು, ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ವಿದ್ಯಾರ್ಥಿಗಳು ಶಾಲೆಗೆ ಬಾರದ ಕಾರಣ ಮುಖ್ಯ ಶಿಕ್ಷಕರು ಈ ವಿಷಯವನ್ನು ಪೋಷಕರ ಗಮನಕ್ಕೆ ತಂದಿದ್ದರು.

‘ಮಕ್ಕಳು ಒಂದೊಂದು ದಿನ ಪಕ್ಕದ ಮನೆಯಲ್ಲಿ ಉಳಿಯುತ್ತಿದ್ದರು. ಅದರಂತೆ ಉಳಿದಿರಬಹುದು ಎಂದು ಭಾವಿಸಿದ್ದೆವು. ಸುಳಿವು ದೊರಕದ ಕಾರಣ ಬುಧವಾರ ದೂರು ನೀಡಿದ್ದೇವೆ’ ಎಂದು ಪೋಷಕ ರವಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.