ADVERTISEMENT

ಪ್ರೊ. ಸದಾನಂದ ಕನವಳ್ಳಿ ನಿಧನ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2015, 20:28 IST
Last Updated 5 ಏಪ್ರಿಲ್ 2015, 20:28 IST

ಧಾರವಾಡ: ಹಿರಿಯ ಸಂಗೀತ ವಿಮರ್ಶಕ, ಸಾಹಿತಿ ಹಾಗೂ ಇಲ್ಲಿಯ ಕ.ವಿ.ವಿ. ಪ್ರಸಾರಾಂಗ ವಿಭಾಗದ ನಿವೃತ್ತ ನಿರ್ದೇಶಕ ಪ್ರೊ. ಸದಾನಂದ ಕನವಳ್ಳಿ (80) ಶುಕ್ರವಾರ ಇಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಇಲ್ಲಿಯ ಶ್ರೀನಗರ ಬಳಿಯ ಜಲದರ್ಶಿನಿಪುರದ ನಿವಾಸಿಯಾಗಿದ್ದ ಅವರು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಮುನ್ಸಿಪಲ್‌ ಕಾಲೇಜಿನ ಇಂಗ್ಲಿಷ್‌ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದರು.

ಮಲ್ಲಿಕಾರ್ಜುನ ಮನ್ಸೂರ, ಗಂಗೂಬಾಯಿ ಹಾನಗಲ್‌ ಮುಂತಾದ ಸಂಗೀತ ದಿಗ್ಗಜರ ಹೆಸರಿನಲ್ಲಿ ಸ್ಥಾಪನೆಯಾಗಿರುವ ಟ್ರಸ್ಟ್‌ಗಳಲ್ಲಿ ಅವರು ಸ್ಥಾಪಕ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಅವರ ದೇಹವನ್ನು ಶನಿವಾರ ಎಸ್‌ಡಿಎಂ ಆಸ್ಪತ್ರೆಗೆ ದಾನ ಮಾಡಲಾಯಿತು. ಅವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.