ಮೇಲುಕೋಟೆ: ಮಕ್ಕಳ ಭಾಗ್ಯ ನೀಡುವ ಉತ್ಸವವೆಂದೇ ಪ್ರತೀತಿಯಲ್ಲಿರುವ ಮೇಲುಕೋಟೆ ಚಲುವನಾರಾಯಣಸ್ವಾಮಿ ಅಷ್ಟತೀರ್ಥೋತ್ಸವ ನ. 2ರ ಭಾನುವಾರ ನಡೆಯಲಿದೆ. ಅಂದು ಸಂಜೆ ತೊಟ್ಟಿಲುಮಡು ಬಳಿ ಜಾತ್ರೆ ಸೇರುವುದರ ಜತೆಗೆ, ವಿವಿಧ ಸಮುದಾಯದವರಿಂದ ಬೃಹತ್ ಅನ್ನ ಸಂತರ್ಪಣೆ ಸಹ ನಡೆಯಲಿದೆ. ಅಲ್ಲದೆ, ಕಲ್ಯಾಣಿಯಲ್ಲಿ ಸ್ವಾಮಿಯ ಪಾದುಕೆಗೆ ವೇದೋಕ್ತವಾಗಿ ಅಭಿಷೇಕ ನೆರವೇರಿಸಿದ ನಂತರ ಉತ್ಸವಕ್ಕೆ ಚಾಲನೆ ಸಿಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.