ADVERTISEMENT

ಸಾವಲ್ಲೂ ಒಂದಾದ ಅಜ್ಜಿ–ಮೊಮ್ಮಗ!

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2014, 19:51 IST
Last Updated 20 ಏಪ್ರಿಲ್ 2014, 19:51 IST

ನಿಪ್ಪಾಣಿ (ಬೆಳಗಾವಿ ಜಿಲ್ಲೆ): ಅಜ್ಜಿಯ ಸಾವಿನ ಸುದ್ದಿ ಕೇಳಿದ ತಕ್ಷಣ ಮೊಮ್ಮಗ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಇಲ್ಲಿಗೆ ಸಮೀಪದ ಗಳತಗಾ ಗ್ರಾಮ­ದಲ್ಲಿ ಶನಿವಾರ ನಡೆದಿದೆ.

ಶಾನಕ್ಕ ಮಹಾಲಿಂಗ ಪರಾಂಜಪೆ (75) ಕೆಲ ದಿನಗಳ ಹಿಂದೆ ರಾಯಬಾಗ ದಲ್ಲಿರುವ ಮಗನ ಮನೆಗೆ  ಹೋಗಿ­ದ್ದರು. ಅವರು ಅಲ್ಲಿ ಹೃದಯಾಘಾತ­ದಿಂದ ಮೃತಪಟ್ಟ ಸುದ್ದಿ ಕೇಳಿದ ತಕ್ಷಣ ಎದೆ ನೋವಿನಿಂದ ಮೊಮ್ಮಗ ಅಮಿತ್‌ ಅಲಿಯಾಸ್‌ ಅಪ್ಪಾ ಸಾಹೇಬ ಮೋಹನ ಶಾಸ್ತ್ರಿ (31) ಕುಸಿದುಬಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆೇ ಅವರು ಮೃತಪಟ್ಟರು.

ಇಬ್ಬರ ಅಂತ್ಯಸಂಸ್ಕಾರವನ್ನು ಒಂದೇ ಕಡೆ ನಡೆಸಲಾಯಿತು. ಶಾನಕ್ಕಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅಮಿತ್‌ ಏಕೈಕ ಪುತ್ರನಾಗಿದ್ದು ಅವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.