ADVERTISEMENT

ಸಿಡಿಲಿಗೆ ಮೂವರು ಬಾಲಕರು ಬಲಿ

​ಪ್ರಜಾವಾಣಿ ವಾರ್ತೆ
Published 22 ಮೇ 2017, 19:30 IST
Last Updated 22 ಮೇ 2017, 19:30 IST
ಹಿರೇಕೆರೂರ (ಹಾವೇರಿ ಜಿಲ್ಲೆ): ತಾಲ್ಲೂಕಿನ ಆಲದಗೇರಿ ಗ್ರಾಮದ ದರ್ಗಾ ಬಳಿ ಸಿಡಿಲು ಬಡಿದು ಮೂವರು ಬಾಲಕರು ಸೋಮವಾರ ಸಂಜೆ ಮೃತಪಟ್ಟಿದ್ದಾರೆ.
 
ರಾಣೆಬೆನ್ನೂರು ನಗರದ ಅರ್ಬಾಜ್‌ ಖಾನ್ ಅಮ್ಜದ್‌ಖಾನ್‌ ಪಠಾಣ (14), ಆಫ್ರಿದ್‌ಖಾನ್ ಇಮಾಮ್‌ಸಾಬ್‌ ಪಠಾಣ (14) ಹಾಗೂ ಅಬ್ದುಲ್‌ಖಾದರ್ ಜಿಲಾನಿ ಅಬ್ದುಲ್‌ಗನಿ ಕೋಡ (14) ಮೃತಪಟ್ಟಿ ದ್ದಾರೆ. ಶಮೀರ್‌ಖಾನ್ ಎಂಬ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
 
ಸಯ್ಯದ್‌ ಜಲಾಲ್‌ ಭರಪೂರ್‌ ಶಾ ವಲಿ ದರ್ಗಾಕ್ಕೆ ಪಾಲಕರೊಂದಿಗೆ ಬಂದಿದ್ದ ಈ ಬಾಲಕರು, ಸಮೀಪದ ಗುಡ್ಡದಿಂದ ಇಳಿಯುವಾಗ ಸಿಡಿಲು ಬಡಿದಿದೆ.
ಹಾವೇರಿ ಮತ್ತು ಹಿರೇಕೆರೂರದಲ್ಲಿ  ಸಾಧಾರಣ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.