ಇಸ್ಲಾಮಾಬಾದ್: ಕದನ ವಿರಾಮ ಉಲ್ಲಂಘಿಸಿರುವ ಭಾರತದ ಪಡೆಗಳು, ತನ್ನ ಒಬ್ಬ ನಾಗರಿಕನನ್ನು ಕೊಂದು ಮೂವರನ್ನು ಗಾಯಗೊಳಿಸಿವೆ ಎಂದು ಪಾಕಿಸ್ತಾನ ಆರೋಪಿಸಿದೆ.
ಈ ಸಂಬಂಧ ಅದು, ಭಾರತದ ಉಪಹೈಕಮಿಷನರ್ ಜೆ.ಪಿ.ಸಿಂಗ್ ಅವರನ್ನು ಕರೆಸಿಕೊಂಡು ಪ್ರತಿಭಟನೆ ದಾಖಲಿಸಿದೆ.
***
ಮಾಹಿತಿಗೆ ಒತ್ತಾಯ
ಕೊಲಂಬೊ : ಶ್ರೀಲಂಕಾದಲ್ಲಿ 8 ವರ್ಷಗಳ ಹಿಂದೆ ನಾಗರಿಕ ಯುದ್ಧ ಕೊನೆಗೊಂಡಾಗಿನಿಂದ ಕಾಣೆಯಾಗಿರುವ ಶ್ರೀಲಂಕಾ ತಮಿಳರ ವಿವರ ಬಹಿರಂಗಪಡಿಸುವಂತೆ, ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರನ್ನು ಇಲ್ಲಿನ ಪ್ರಮುಖ ತಮಿಳು ಪಕ್ಷ ತಮಿಳ್ ನ್ಯಾಶನಲ್ ಅಲಯನ್ಸ್ ಒತ್ತಾಯಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.