ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕೆಂಬ ಚರ್ಚೆಗಳು ನಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರೂ ಇದನ್ನು ಪ್ರಸ್ತಾಪಿಸಿದ್ದಾರೆ.
ಆದರೆ ಭಾರತದಂಥ ದೇಶದಲ್ಲಿ ಇದರ ಸಾಧಕ–ಬಾಧಕಗಳ ಬಗ್ಗೆ ಜನಾಭಿಪ್ರಾಯ ಪಡೆಯುವ ಅಗತ್ಯವಿದೆ. ಒಂದೊಂದು ರಾಜ್ಯದಲ್ಲೂ ವಿಭಿನ್ನವಾದ ರಾಜಕೀಯ ಸ್ಥಿತಿ ಇರುವ, ಕ್ಷಣ ಕ್ಷಣಕ್ಕೂ ಬದಲಾಗುವ ರಾಜಕೀಯ ಪರಿಸ್ಥಿತಿ ಹಾಗೂ ಸರ್ಕಾರ ರಚಿಸಿದ ಮರು ಗಳಿಗೆಯಲ್ಲೇ ಭಿನ್ನಮತ ಸ್ಫೋಟಗೊಳ್ಳುವ ಪರಿಸ್ಥಿತಿ ಇರುವ ಈ ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವುದು ಸಾಧ್ಯವಿಲ್ಲದ ಮಾತು.
ಬಿಜೆಪಿಯವರೇ ನಡೆಸಿದ ಅಪರೇಷನ್ ‘ಕಮಲ’, ಕಾಂಗ್ರೆಸ್ನವರ ಅಪರೇಷನ್ ‘ಹಸ್ತ’ಗಳು ಮುಂದೆಯೂ ನಡೆಯುವುದಿಲ್ಲ ಎನ್ನುವ ಖಾತರಿ ಏನು? ಒಂದು ರಾಜ್ಯದಲ್ಲಿ ರಾಜಕೀಯ ಅಸ್ಥಿರತೆಯಿಂದ ಸರ್ಕಾರ ಬಿದ್ದುಹೋದರೆ ಮತ್ತೆ ಹೊಸದಾಗಿ ಎಲ್ಲಾ ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಸಬೇಕೇ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.