ADVERTISEMENT

ಇನ್ನಾದರೂ ಬಾಯಿಬಿಡಿ...!

ಜ್ಯೋತಿ ದೇಸಾಯಿ, ಧಾರವಾಡ
Published 29 ಜುಲೈ 2014, 19:30 IST
Last Updated 29 ಜುಲೈ 2014, 19:30 IST

ನಾಮಫಲಕ ಪ್ರಕರಣದಿಂದ ಬೆಳಗಾವಿ ಬೇಗುದಿಗೆ ಸಿಲುಕಿದ್ದರೂ  ಯಾವೊಬ್ಬ ಜನಪ್ರತಿ­ನಿಧಿ­ಯಾಗಲಿ, ಸರ್ಕಾರದ ಪ್ರಮುಖ ಸ್ಥಳಗಳಲ್ಲಿ ಕುಳಿತಿರುವ ಜಿಲ್ಲೆಯ ಶಾಸಕರಾಗಲಿ ಬಾಯಿ ಬಿಡದೇ ಇರುವುದು ನಿಜಕ್ಕೂ ನಾಚಿಗೆಗೇಡಿನ ಸಂಗತಿ.

ಬೆಳಗಾವಿ ಗಡಿ ಭಾಗದಲ್ಲಿ ಎಂಇಎಸ್ ಪುಂಡರು ಅಟ್ಟಹಾಸ ಮೆರೆಯುತ್ತಿದ್ದರೆ  ಜಿಲ್ಲಾ ಆಡಳಿತ ತೋರಿಕೆಯ ಕ್ರಮ ಕೈಗೊಂಡಿದೆ.  ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯರು ಸುಮ್ಮನೆ ಕುಳಿತಿ­ರುವುದು ಸರಿಯಲ್ಲ. ಕೆಲವು ಮುಖ್ಯ  ಸಾಹಿತಿ­ಗಳ ನಡವಳಿಕೆ ನೋಡಿದರೆ ಇವರಿಗೂ ಕನ್ನಡತನ ಉಳಿಯುವುದು ಬೇಕಿಲ್ಲ­ವೇನೊ ಎಂಬ ಅನು­ಮಾನ ಮೂಡುತ್ತದೆ. ಕರ್ನಾಟಕ ಏಕೀಕರಣ ಹಾಗೂ ಗೋಕಾಕ್ ಚಳವಳಿಯನ್ನು ನೆನಪಿಸಿ­ಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.