ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಿ ಒಂದು ತಿಂಗಳು ಕಳೆದರೂ ಐಚ್ಛಿಕ ಕನ್ನಡದ ಪಠ್ಯಪುಸ್ತಕಗಳು ಇನ್ನೂ ನಮ್ಮ ಕೈಗೆ ಬಂದಿಲ್ಲ. ಮಾರುಕಟ್ಟೆಯಲ್ಲಿಯೂ ಲಭ್ಯವಿಲ್ಲ. ಅಂತರ್ಜಾಲದಲ್ಲಿ ಹುಡುಕಿದರೆ ಪಾಠಗಳ ಹೆಸರಿದ್ದರೂ ಪೂರ್ಣ ಪಾಠ ಲಭ್ಯವಿಲ್ಲದೆಯಾವುದನ್ನು ಎಷ್ಟು ಓದಬೇಕು ಎನ್ನುವ ಗೊಂದಲವಿದೆ.
ಐಚ್ಛಿಕ ಕನ್ನಡ ಪಠ್ಯಕ್ರಮದಲ್ಲಿ ಹಳೆಗನ್ನಡ ಕಾವ್ಯಗಳೇ ಹೆಚ್ಚು ಇರುವುದರಿಂದ ಅಧ್ಯಯನದ ಅಗತ್ಯ ಹೆಚ್ಚಿರುತ್ತದೆ.
ಐಚ್ಛಿಕ ಕನ್ನಡ ವಿದ್ಯಾರ್ಥಿಗಳಿಗೆ ಉಂಟಾಗಿರುವ ತೊಂದರೆಯನ್ನು ಕೂಡಲೇ ನಿವಾರಿಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.