ನೇಪಾಳದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಸಾವಿರಾರು ಜನರು ಮೃತಪಟ್ಟಿದ್ದಾರೆ. ಅಪಾರ ಆಸ್ತಿ ಪಾಸ್ತಿ ನಷ್ಟವಾಗಿದೆ. ಇಂತಹ ಕಷ್ಟದಲ್ಲಿ ಎಲ್ಲ ದೇಶಗಳಿಗಿಂತ ಮೊದಲು ನೇಪಾಳದ ನೆರವಿಗೆ ನಿಂತದ್ದು ಭಾರತ.
ಅಲ್ಲಿನ ಸಂತ್ರಸ್ತರಿಗೆ ಔಷಧ, ಆಹಾರ, ನೀರು ಇತ್ಯಾದಿ ಸಾಮಗ್ರಿಗಳನ್ನು ಪೂರೈಸುತ್ತಿರುವ ನಮ್ಮ ದೇಶದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ವೈದ್ಯರು ಹಾಗೂ ವಾಯುದಳದ ಸಿಬ್ಬಂದಿಯ ಕಾರ್ಯ ಶ್ಲಾಘನೀಯ. ನೇಪಾಳದ ಈ ಕಷ್ಟ, ನೋವು ಮರೆಯಾಗಿ ಆದಷ್ಟು ಬೇಗ ಅದು ಮೊದಲಿನ ಹಾಗೆ ಕಂಗೊಳಿಸಲಿ.
ರಾಮನಗೌಡ ಸಿ. ಬಿರಾದಾರ, ಶಿರಕನಹಳ್ಳಿ, ಇಂಡಿ ತಾಲ್ಲೂಕು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.