ADVERTISEMENT

ಕಾಮಾಲೆ ಕಣ್ಣಿನವರು

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 19:30 IST
Last Updated 10 ಜನವರಿ 2017, 19:30 IST

ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಅನಾಚಾರ, ಲೈಂಗಿಕ ಕಿರುಕುಳಕ್ಕೆ  ಅವರು ತೊಡುವ ಆಧುನಿಕ ಉಡುಗೆಯೇ ಮುಖ್ಯ ಕಾರಣ ಎಂಬ ಮಾತೆ ಮಹಾದೇವಿ ಅವರ ಹೇಳಿಕೆ (ಪ್ರ.ವಾ., ಜ. 7) ಖಂಡನೀಯ.

ಹಾಲುಗಲ್ಲದ ಹಸುಳೆಗಳು, ಶಿಶುವಿಹಾರಗಳಿಗೆ ಹೋಗುವ ಕಂದಮ್ಮಗಳು, ಬಾಲಕಿಯರು, ಮಹಿಳೆಯರು ಎಲ್ಲರ ಮೇಲೂ ಆಸ್ಪತ್ರೆ, ಶಾಲೆ, ಮನೆ, ರಸ್ತೆ, ವಾಹನ ಎಲ್ಲೆಂದರಲ್ಲಿ  ಲೈಂಗಿಕ ದೌರ್ಜನ್ಯಗಳು ನಡೆಯುತ್ತಲೇ ಇವೆ.

ಕಾಮಾಲೆ ಕಣ್ಣಿನ ಕಾಮಪಿಪಾಸುಗಳು ಹೆಣ್ಣು ಮಕ್ಕಳು ಯಾವುದೇ ರೂಪದಲ್ಲಿದ್ದರೂ ತಮ್ಮ ಉದ್ದೇಶ ಈಡೇರಿಸಿಕೊಳ್ಳುತ್ತಾರೆ. ಹೀಗಿರುವಾಗ ಅತ್ಯಾಚಾರಕ್ಕೆ ಉಡುಗೆ ತೊಡುಗೆಯಷ್ಟೇ ಹೇಗೆ ಕಾರಣವಾಗುತ್ತದೆ?
-ಶಾಂತ ಡಿ. ಗೌಡ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT