ಒಂದು ಕಿಲೋಮೀಟರ್ ಪ್ರಯಾಣಕ್ಕೆ ರೂ. 10 ಟಿಕೆಟ್ ದರ ನಿಗದಿಪಡಿಸುವುದು ಯಾವ ನ್ಯಾಯ? ನಂಬಿ ಅಥವಾ ಬಿಡಿ; ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನಲ್ಲಿ ಯಮನೂರು–ಆರೆಕುರಹಟ್ಟಿ ಗ್ರಾಮಗಳ ನಡುವಿನ ಅಂತರ ಕೇವಲ ಒಂದು ಕಿ.ಮೀ. ಆದರೆ ಇಲ್ಲಿಗೆ ತಲುಪಲು ರಾಜ್ಯ ರಸ್ತೆ ಸಾರಿಗೆ ಬಸ್ಸಿಗೆ ರೂ. 10 ತೆರಬೇಕಾದ ಸ್ಥಿತಿ ಇದೆ!
ಅದಾವ ನೀತಿಯೋ, ಸಾರಿಗೆ ನಿಗಮವು ಸರ್ವಾಧಿಕಾರಿ ಧೋರಣೆ ತಳೆದಿದೆ. ಹಳ್ಳಿ ಮುಗ್ಧರು ಕಮಕ್ ಕಿಮಕ್ ಎನ್ನದೇ ಈ ದರ ತೆತ್ತು ಸಾರಿಗೆ ನಿಗಮದ ಬೊಕ್ಕಸ ತುಂಬುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.