ADVERTISEMENT

ಯಾರು ಜನಪರ?

ಹುರುಕಡ್ಲಿ ಶಿವಕುಮಾರ
Published 20 ಮಾರ್ಚ್ 2018, 19:30 IST
Last Updated 20 ಮಾರ್ಚ್ 2018, 19:30 IST

ರಾಜ್ಯಸಭಾ ಚುನಾವಣೆಯ ಸ್ಪರ್ಧಾಳುಗಳ ಆಸ್ತಿ ವಿವರ (ಪ್ರ.ವಾ., ಮಾ. 13) ಗಮನಿಸಿದರೆ ಮಹಾತ್ಮ ಗಾಂಧಿ ಪ್ರತಿಪಾದಿಸಿದ ಸರಳತೆಯ ರಾಜಕೀಯ ಕಣ್ಮರೆಯಾಗುತ್ತಿರುವುದು ಸ್ಪಷ್ಟವಾಗುತ್ತಿದೆ! ಒಂದು ಕಡೆ ರೈತರ ಆತ್ಮಹತ್ಯೆ, ಮತ್ತೊಂದು ಕಡೆ ವಿದ್ಯಾರ್ಥಿ ಸಮೂಹ, ಯುವ ಜನರ ಅತಂತ್ರ ಬದುಕು. ಆದರೆ ಲೋಕಸಭೆ– ರಾಜ್ಯಸಭೆಯಲ್ಲಿ ಈ ವಿಷಯಗಳ ಕುರಿತು ಚರ್ಚೆಯೇ ಆಗುತ್ತಿಲ್ಲ!

ಕೋಟ್ಯಧಿಪತಿಗಳೇ ಅಲ್ಲಿರುವಾಗ ಈ ಸಮಸ್ಯೆಗಳ ಕುರಿತು ಚರ್ಚೆಯಾಗುವುದಾದರೂ ಹೇಗೆ? ಆಶ್ಚರ್ಯವೆಂದರೆ ಶಾಸಕ, ಸಂಸದ, ಮಂತ್ರಿ– ಮಹೋದಯರ ಸಂಬಳ, ಸಾರಿಗೆ, ಭತ್ಯೆಗಳು ಚರ್ಚೆಗೊಳಗಾಗದೇ ಹೆಚ್ಚಳಗೊಳ್ಳುತ್ತಿವೆ. ಜನಪರವೆಂದು ಪ್ರಚಾರ ಗಿಟ್ಟಿಸಿಕೊಳ್ಳುವ ರಾಜಕಾರಣಿಗಳ ಸ್ವಾರ್ಥವೇ ಮೇಲುಗೈ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT