ADVERTISEMENT

ವಸ್ತುನಿಷ್ಠವಾಗಿರಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 27 ನವೆಂಬರ್ 2015, 19:30 IST
Last Updated 27 ನವೆಂಬರ್ 2015, 19:30 IST

ರಾಜ್ಯ ಎದುರಿಸುತ್ತಿರುವ ಬರದ ಕುರಿತು ಚರ್ಚೆ ಮಾಡಿ ಸಮಸ್ಯೆಗಳನ್ನು ಬಗೆಹರಿಸುವುದು ಬಿಟ್ಟು ಪ್ರತಿಪಕ್ಷಗಳು  ಹಳೆಯ ಚಾಳಿ ಮುಂದುವರಿಸಿವೆ. ಪ್ರತಿಪಕ್ಷಗಳಿರುವುದು ಟೀಕೆ ಮಾಡಲು ಮಾತ್ರ ಎಂಬಂತಾಗಿದೆ. ತಮ್ಮ ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರದೆ ಅನಗತ್ಯವಾಗಿ ರಾಜಕೀಯ ಮಾಡುತ್ತಿವೆ. ವಿಧಾನಸಭೆಯಲ್ಲಿ ಧಿಕ್ಕಾರ ಕೂಗಿ ಸಭೆಯ ಪಾವಿತ್ರ್ಯವನ್ನು ಹರಣಮಾಡಿವೆ.

ತಾವು ಜನಪ್ರತಿನಿಧಿಗಳಾಗಿ ಆಯ್ಕೆ ಆಗಿರುವುದು ತಮ್ಮ ಅಮೂಲ್ಯವಾದ ಸಮಯವನ್ನು ಹಾಳುಮಾಡುವ ಸಲುವಾಗಿಯೇ ಎಂಬ ಬಗ್ಗೆ  ಜನಪ್ರತಿನಿಧಿಗಳು ಯೋಚಿಸಬೇಕು. ಪ್ರತಿಪಕ್ಷಗಳು ವಸ್ತುನಿಷ್ಠವಾದ ಟೀಕೆಗಳನ್ನು ಮಾಡಬೇಕೇ ಹೊರತು ವ್ಯಕ್ತಿನಿಷ್ಠವಾಗಿ ಅಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.