ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಜೈಲು ಶಿಕ್ಷೆ ಆದ ನಂತರ ತಮಿಳುನಾಡಿನ ಕೆಲವರು ತುಂಬಾ ಭಾವುಕರಾಗಿ ನಡೆದುಕೊಳ್ಳುತ್ತಿದ್ದಾರೆ. ಸಾರ್ವಜನಿಕ ಆಸ್ತಿ ನಷ್ಟ ಮಾಡಿ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಅವರ ಕುರುಡು ಅಭಿಮಾನವನ್ನು ತೋರಿಸುತ್ತದೆ.
ಜನರ ದುಡ್ಡು ದೋಚಿ, ಅಧಿಕಾರ ನಡೆಸಿದ ಒಬ್ಬ ಮುಖ್ಯಮಂತ್ರಿ ಕುರಿತು ಐತಿಹಾಸಿಕ ತೀರ್ಪು ನೀಡುವುದರ ಮೂಲಕ ನ್ಯಾಯಾಂಗ ವ್ಯವಸ್ಥೆ ತನ್ನ ಕರ್ತವ್ಯಪ್ರಜ್ಞೆ ಮೆರೆದಿದೆ. ಜಯಲಲಿತಾ ಅವರನ್ನು ಬೆಂಬಲಿಸುವುದು ಎಂದರೆ ಭ್ರಷ್ಟಾಚಾರವನ್ನು ಬೆಂಬಲಿಸಿದಂತೆಯೇ ಸರಿ. ವಿಶೇಷ ಕೋರ್ಟ್ ತೀರ್ಮಾನ ಸರಿಯಾಗಿದೆ. ನಮ್ಮ ಜನರಿಗೆ ನ್ಯಾಯಾಂಗ ವ್ಯವಸ್ಥೆ ನಿಷ್ಠುರವಾಗಿರುವುದು ಬೇಡವೇ? ಅಂಧಾಭಿಮಾನಿಗಳು ವ್ಯಕ್ತಿಪೂಜೆಯಿಂದ ಹೊರ-ಬರುವುದು ಯಾವಾಗ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.