ಹಿರಿಯ ರಾಜಕಾರಣಿ ಎಚ್.ಎಸ್.ಮಹದೇವ ಪ್ರಸಾದ್ ಅವರ ಅಕಾಲಿಕ ಸಾವು ಅತ್ಯಂತ ನೋವಿನ ಸಂಗತಿ. ಅಜಾತಶತ್ರುವಿನ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಎಲ್ಲಾ ಪಕ್ಷದವರ ಜತೆ ಸ್ನೇಹ ಸಂಬಂಧ ಹೊಂದಿದ್ದರು. ಭರವಸೆಯ ರಾಜಕಾರಣಿಯಾಗಿದ್ದರು.
‘ಶರಣರ ಗುಣವನ್ನು ಮರಣದಲ್ಲಿ ಕಾಣು’ ಎನ್ನುವಂತೆ ಬಾಳಿ ಬದುಕಿದ ಮಹದೇವ ಪ್ರಸಾದ್ ಬಹುಕಾಲ ಜನರ ನೆನಪಿನಲ್ಲಿ ಉಳಿಯುತ್ತಾರೆ.
-ಕೆ.ವಿ.ವಾಸು, ಮೈಸೂರು