ಎಲ್ಲಿದೆ ‘ಸಿಹಿಯ’ ಹಾದಿ?
ಬೆಲೆಗಳೆಲ್ಲ ಗಗನಕ್ಕೇರಿ
ಮುಟ್ಟಿದ್ದೆಲ್ಲ ‘ಕಹಿ’ಯಾಗುತ್ತಿರುವಾಗ!
ಎಲ್ಲಿದೆ ‘ಸಿಹಿಯ’ ಮಾತು?
ಮತ ಮತ್ಸರಗಳ ನಡುವೆ
ಮೌಢ್ಯವೂ ‘ಕೇಕೆ’ ಹಾಕುತ್ತಿರುವಾಗ!
ಎಲ್ಲಿದೆ ‘ನ್ಯಾಯದ’ ಕಾಲ?
ಬೇಲಿಯೇ ಎದ್ದು ಹೊಲ ಮೇಯ್ದು
‘ಅಟ್ಟಹಾಸ’ ಮೆರೆಯುತ್ತಿರುವಾಗ!
ಎಲ್ಲಿದೆ ‘ಆಶಯದ’ ಹಣತೆ?
ಸ್ವಾರ್ಥ, ಭ್ರಷ್ಟಾಚಾರ, ಭಿನ್ನಮತದ ‘ಕತ್ತಲೆಯೇ’ ತುಳುಕುತ್ತಿರುವಾಗ!
ಹೇಗೆ ಸಂಭ್ರಮಿಸಲಿ?
ಹಬ್ಬ ಹರಿದಿನಗಳ ಸಡಗರ
ಬರದ ಬಿಸಿಗೆ ‘ಬದುಕೇ ಬಿರುಕು’
ಬಿಟ್ಟಿರುವಾಗ!
– ಅನಾರ್ಕಲಿ ಸಲೀಂ ಚಿಣ್ಯ ಶ್ರೀರಂಗಪಟ್ಟಣ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.