ಮುಂಬೈ: ಸುದೀರ್ಘ ಕಾಲ ಕ್ರಿಕೆಟ್ನಲ್ಲಿ ಸಾಧನೆ ಮಾಡಲು ಬಿಸಿಸಿಐ ಹಿಂದಿನ ಅಧ್ಯಕ್ಷ ರಾಜಸಿಂಗ್ ಡುಂಗರಪುರ್ ನೆರವಾಗಿದ್ದರು ಎಂದು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿ ಡುಂಗರಪುರ್ ಅವರ ಹೆಸರಿನಲ್ಲಿ ಸ್ಥಾಪಿಸಿರುವ ದ್ವಾರವನ್ನು ಉದ್ಘಾಟಿಸಿದ ಅವರು ‘ಡುಂಗರಪುರ್ ಅವರು ನನ್ನ ಕ್ರಿಕೆಟ್ ಜೀವನದುದ್ದಕ್ಕೂ ಸಲಹೆ ನೀಡಿ ಮುನ್ನಡೆಸಿದ್ದಾರೆ’ ಎಂದರು.
‘13 ವರ್ಷದವನಾಗಿದ್ದ ಸಂದರ್ಭದಲ್ಲಿ ಇಲ್ಲಿ ನಡೆದ ಪಂದ್ಯವೊಂದರಲ್ಲಿ ನಾನು ಚೆನ್ನಾಗಿ ಆಡಿದ್ದೆ. ಆಗ ಮಾಧವ ಆಪ್ಟೆ ಅವರು ನನ್ನನ್ನು ರಾಜ್ ಸಿಂಗ್ ಅವರಿಗೆ ಪರಿಚಯಿಸಿದ್ದರು. ಅಲ್ಲಿಂದ ನಮ್ಮ ಸಂಬಂಧ ಬೆಳೆಯಿತು’ ಎಂದು ಸಚಿನ್ ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.