ಬೆಂಗಳೂರು: ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಬಿ.ಎನ್. ಕಿರಣಕುಮಾರ್ ಮತ್ತು ಕೆ.ಜಿ. ಯಶಸ್ವಿನಿ ಕ್ರಮವಾಗಿ ಕರ್ನಾಟಕದ ಪುರುಷರ ಮತ್ತು ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ತಂಡಗಳ ನಾಯಕತ್ವ ವಹಿಸಲಿದ್ದಾರೆ.
ಹರಿಯಾಣದ ಗುರುಗ್ರಾಮ ದಲ್ಲಿ ಜನವರಿ 5ರಿಂದ 9ರವರೆಗೆ 63ನೇ ರಾಷ್ಟ್ರೀಯ ಸೀನಿಯರ್ ಚಾಂಪಿಯನ್ಷಿಪ್ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ತಂಡಗಳು ಇಂತಿವೆ
ಪುರುಷರು: ಬಿ.ಎನ್.ಕಿರಣಕುಮಾರ್ (ನಾಯಕ), ವಿಜಯಕುಮಾರ್, ಎಚ್.ಎಂ.ರಂಜಿತ್, ಮಹಾದೇವ ಸ್ವಾಮಿ, ಎನ್.ವಿ.ಉಲ್ಲಾಸ್, ಡಿ.ವಿ.ಶ್ರೀನಿವಾಸ್, ವಾರಿಧಿ, ಗೋಪಾಲ್, ವೀರೇಂದ್ರ ಪಾಟೀಲ ಮತ್ತು ವೇಣುಗೋಪಾಲ್.
ಮಹಿಳೆಯರು: ಕೆ.ಜಿ.ಯಶಸ್ವಿನಿ (ನಾಯಕಿ), ಜಿ.ಜಯಲಕ್ಷ್ಮಿ, ಬಿ.ಡಿ.ಲಾವಣ್ಯ, ಎಂ.ಸುಶ್ಮಿತಾ, ಎಸ್.ಕೆ.ಪಲ್ಲವಿ, ಎಂ.ಎಂ.ಕವನ, ಎಚ್.ಎಂ.ಮೇಘನಾ, ಜಿ.ಪಲ್ಲವಿ, ಎಸ್.ಲಲಿತಾಂಬ ಮತ್ತು ಕೆ.ಪವಿತ್ರ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.