ADVERTISEMENT

ಕಸಾಪ ಚುನಾವಣೆ: ಶುರು ಮಾಡಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 20:21 IST
Last Updated 15 ಸೆಪ್ಟೆಂಬರ್ 2021, 20:21 IST

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯು ಕೋವಿಡ್ ಕಾರಣದಿಂದ ಅಂತಿಮ ಹಂತದಲ್ಲಿ ನಿಂತಿತ್ತು. ಇದೀಗ ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ. ಇನ್ನು ಕಸಾಪ ಚುನಾವಣೆಗೆ ಹಸಿರು ನಿಶಾನೆ ಸಿಕ್ಕರೆ, ಎಲ್ಲಿ ನಿಂತಿತ್ತೋ ಅಲ್ಲಿಂದ ಆರಂಭವಾಗಿ ಚುನಾವಣಾ ಪ್ರಕ್ರಿಯೆ ಪೂರೈಸಿದರೆ, ಪದಾಧಿಕಾರಿ ಗಳಾಗ ಬಯಸುವವರು ನಿಟ್ಟುಸಿರುಬಿಡುವಂತಾಗುತ್ತದೆ. ಕನ್ನಡದ ಕೆಲಸ ರಾಜ್ಯದಾದ್ಯಂತ ಸುಗಮವಾಗಿ ಜರುಗಲು ಚುನಾವಣೆ ಮುಗಿದರೆ ಒಳ್ಳೆಯದು.

– ಸಂತೆಬೆನ್ನೂರು ಫೈಜ್ನಟ್ರಾಜ್,ಸಂತೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT