ADVERTISEMENT

ವಾಚಕರ ವಾಣಿ | ಸೌದೆ ಉರಿಸಿ, ಎಣ್ಣೆ ಹಾಕದೆ ಅಡುಗೆ ಮಾಡಿ!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 19 ಆಗಸ್ಟ್ 2021, 22:30 IST
Last Updated 19 ಆಗಸ್ಟ್ 2021, 22:30 IST

ಡೀಸೆಲ್ ಬೆಲೆ ಹೆಚ್ಚಳ ಕುರಿತು ಪತ್ರಿಕಾಮಿತ್ರರು ಕೇಳಿದ ಪ್ರಶ್ನೆಗೆ ಕೇಂದ್ರ ಸಚಿವರೊಬ್ಬರು ‘ಎಲೆಕ್ಟ್ರಿಕ್ ವಾಹನ’ ಬಳಸಿ ಎಂದು ಸಲಹೆ ನೀಡಿರುವುದು ವರದಿಯಾಗಿದೆ. ದಿನನಿತ್ಯ ಬಳಸುವ ಗ್ಯಾಸ್ ಸಿಲಿಂಡರ್, ಅಡುಗೆ ಎಣ್ಣೆ ಮುಂತಾದವುಗಳ ಬೆಲೆ ಏರುತ್ತಲೇ ಇದೆ. ಇದಕ್ಕೆ ಸಚಿವರ ಬಳಿ ಯಾವುದಾದರೂ ಪರ್ಯಾಯ ಇದೆಯೇ? ಸೌದೆ ಉರಿಸಿ ಅಥವಾ ಎಣ್ಣೆ ಹಾಕದೆ ಅಡುಗೆ ಮಾಡಿ ಎಂಬಂಥ ಉತ್ತರಗಳೇನಾದರೂ ಇರಬಹುದು!

ಕೋವಿಡ್‌ ಕಾಲಘಟ್ಟದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಜನರ ಗಾಯದ ಮೇಲೆ ಬರೆ ಎಳೆದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಆಗ ಜನ ಪರ್ಯಾಯ ವ್ಯವಸ್ಥೆಗಳನ್ನು ತಾವಾಗೇ ಮಾಡಿಕೊಳ್ಳುತ್ತಾರೆ.

- ಡಾ. ಎಚ್.ತುಕಾರಾಂ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.