ತೋಟಗಳಲ್ಲಿ ಹಾವು ಬರುವುದು ಸಹಜ. ಅವುಗಳ ಸಮಸ್ಯೆಯಿಂದ ಮುಕ್ತವಾಗಲು ಕೆಲವು ಸಲಹೆ:
* ಬೆಳ್ಳುಳ್ಳಿಯನ್ನು ಜಜ್ಜಿ ಅದನ್ನು ನೀರಿಗೆ ಹಾಕಿ, ಅದರಿಂದ ತೋಟಕ್ಕೆ ಸಿಂಪರಣೆ ಮಾಡಬೇಕು.
* ಪುದೀನಾ ಅಥವಾ ಕರಿಮೆಣಸಿನ ಗಿಡಗಳನ್ನು ಬೆಳೆಸಿದರೆ ಹಾವು ಸುಳಿಯುವುದಿಲ್ಲ.
* ಗುಂಪಾಗಿ ಮತ್ತು ಉದ್ದವಾಗಿ ಬೆಳೆದ ಹುಲ್ಲುಗಳು ಹಾವಿಗೆ ಇಷ್ಟ. ಆದುದರಿಂದ ಅವು ತೋಟದಲ್ಲಿ ಇಲ್ಲದಂತೆ ನೋಡಿಕೊಳ್ಳಬೇಕು.
* ಗಿಡಗಳ ಕೊಂಬೆಗಳನ್ನು ಕತ್ತರಿಸಿದರೆ ಅವುಗಳನ್ನು ಅಲ್ಲಿಯೇ ಬೀಸಾಡಬೇಡಿ. ತೋಟವು ಶುಚಿಯಾಗಿದ್ದ ಹಾವು ಬರುವುದಿಲ್ಲ. ಬಂದರೂ ಅವು ಬೇಗನೆ ಕಾಣುವ ಕಾರಣ ಓಡಿಸಲು ಸಹಕಾರಿಯಾಗುವುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.