ಬೆಂಗಳೂರು: ಆದಾಯ ತೆರಿಗೆ ಇಲಾಖೆಯು ನಗರದ ಮಿಷನ್ ರಸ್ತೆಯಲ್ಲಿನ ಯುನಿಟಿ ಕಟ್ಟಡ ಸಂಕೀರ್ಣದಲ್ಲಿ ಇರುವ ಆದಾಯ ತೆರಿಗೆ ಕಚೇರಿಯಲ್ಲಿ ಹೊಸದಾಗಿ ಆರಂಭಿಸಿರುವ ಸೇವಾ ಕೇಂದ್ರವನ್ನು, ಆದಾಯ ತೆರಿಗೆ ಮುಖ್ಯ ಕಮಿಷನರ್ ಎಂ. ಎಲ್. ಅಗರವಾಲ್ ಅವರು ಶುಕ್ರವಾರ ಉದ್ಘಾಟಿಸಿದರು.
ತೆರಿಗೆದಾರರಿಗೆ ಅತ್ಯುತ್ತಮ ಸೇವೆ ಒದಗಿಸಲು ಈ ಸೇವಾ ಕೇಂದ್ರ ನೆರವಾಗಲಿದೆ. ಸರ್ಕಾರಿ ಕಚೇರಿಗಳ ಸೇವಾ ಗುಣಮಟ್ಟ ನಿರ್ವಹಣೆಯ ನಿಯಮ `ಸೇವೊತ್ತಮ~ ಪರಿಕಲ್ಪನೆಯನ್ನು ಈ ಕೇಂದ್ರದಲ್ಲಿ ಪಾಲಿಸಲಾಗುವುದು. ತರಬೇತಿ ಪಡೆದ ಸಿಬ್ಬಂದಿಯು ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ತೆರಿಗೆದಾರರಿಗೆ ಅತ್ಯುತ್ತಮ ಸೇವೆ ಒದಗಿಸಲಿದ್ದಾರೆ. ಈ ಸೇವಾ ಕೇಂದ್ರದಲ್ಲಿ ಆದಾಯ ತೆರಿಗೆ ಲೆಕ್ಕಪತ್ರ ಗಳನ್ನು (ಐ.ಟಿ ರಿಟರ್ನ್ಸ್) ಸಲ್ಲಿಸುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.