ADVERTISEMENT

ಗ್ರಾಹಕರ ಹಣ ಸುರಕ್ಷಿತ: ಪಿಎನ್‌ಬಿ

ಪಿಟಿಐ
Published 2 ಏಪ್ರಿಲ್ 2018, 19:30 IST
Last Updated 2 ಏಪ್ರಿಲ್ 2018, 19:30 IST

ನವದೆಹಲಿ: ಗ್ರಾಹಕರ ಹಣ ಸುರಕ್ಷಿತವಾಗಿದ್ದು, ಯಾವುದೇ ಬಗೆಯಲ್ಲಿ ಆತಂಕ ಪಡಬೇಕಾಗಿಲ್ಲ ಎಂದು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಭರವಸೆ ನೀಡಿದೆ.

₹ 13 ಸಾವಿರ ಕೋಟಿಗಳ ವಂಚನೆ ಹಗರಣಕ್ಕೆ ಸಿಲುಕಿರುವ ಬ್ಯಾಂಕ್‌, ಯಾವುದೇ ಬಗೆಯ ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿಕೊಂಡಿದೆ. ಗ್ರಾಹಕರು ಯಾವುದೇ ಸಮಯದಲ್ಲಿ ತಮ್ಮ ಹಣ ಮರಳಿ ಪಡೆಯಬಹುದು ಅಥವಾ ಠೇವಣಿ ಇರಿಸಬಹುದಾಗಿದೆ ಎಂದು ಹೇಳಿದೆ.

ಗ್ರಾಹಕರ ಮನದಲ್ಲಿ ಮೂಡಿರುವ ಸಂದೇಹಗಳಿಗೆ ಬ್ಯಾಂಕ್‌  ಪ್ರಶ್ನೋತ್ತರ ರೂಪದಲ್ಲಿ ಉತ್ತರ ನೀಡುವ ಪ್ರಯತ್ನ ಮಾಡಿದೆ. ಅಕ್ರಮ ವಹಿವಾಟುಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಹೀಗಾಗಿ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಿಯಂತ್ರಣ ಸಂಸ್ಥೆಗಳು ಮತ್ತು ಕಾಯ್ದೆ ಜಾರಿ ಸಂಸ್ಥೆಗಳ ಗಮನಕ್ಕೆ ತರಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.