ADVERTISEMENT

ಬಡ್ಡಿದರ ಕಡಿತಕ್ಕೆ ಜೇಟ್ಲಿ ಒಲವು

ಹಣಕಾಸು ನೀತಿ ಪರಾಮರ್ಶೆ ಇಂದು

ಪಿಟಿಐ
Published 5 ಜೂನ್ 2017, 19:30 IST
Last Updated 5 ಜೂನ್ 2017, 19:30 IST
ಬಡ್ಡಿದರ ಕಡಿತಕ್ಕೆ ಜೇಟ್ಲಿ ಒಲವು
ಬಡ್ಡಿದರ ಕಡಿತಕ್ಕೆ ಜೇಟ್ಲಿ ಒಲವು   

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಗವರ್ನರ್‌ ಉರ್ಜಿತ್‌ ಪಟೇಲ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ)  ಮಂಗಳವಾರ ಸಭೆ ಸೇರಲಿದೆ.

ಹಣದುಬ್ಬರ ನಿಯಂತ್ರಣದಲ್ಲಿರುವುದರಿಂದ ಬಡ್ಡಿದರ ಕಡಿತಕ್ಕೆ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಒಲವು ತೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ, ಜಿಎಸ್‌ಟಿ  ಪರಿಣಾಮಗಳ ನ್ನು ಎದುರು ನೋಡುತ್ತಿರುವ ಆರ್‌ಬಿಐ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಹಣಕಾಸು ತಜ್ಞರು ವಿಶ್ಲೇಷಿಸಿದ್ದಾರೆ.

ADVERTISEMENT

ನಿಯಂತ್ರಣದಲ್ಲಿರುವ ಹಣದುಬ್ಬರ ಮತ್ತು ತೈಲ ಬೆಲೆಗಳು ಹಾಗೂ ಉತ್ತಮ ಮುಂಗಾರು ಮುನ್ಸೂಚನೆಯಿಂದಾಗಿ ಬಡ್ಡಿದರ ಕಡಿತ ಎದುರು ನೋಡುತ್ತಿರುವುದಾಗಿ ಜೇಟ್ಲಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಖಾಸಗಿ ರಂಗ, ಕೈಗಾರಿಕಾ ವಲಯಗಳು ಕೂಡ ಬಡ್ಡಿದರ ಕಡಿತದ ಬಗ್ಗೆ ಆಶಾಭಾವನೆ ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.