ನವದೆಹಲಿ(ಪಿಟಿಐ): ಹಣಕಾಸು ಮಾರುಕಟ್ಟೆ ಮೇಲೆ ಮಿತಿ ಮೀರಿದ ನಿಯಂತ್ರಣ ವಿಧಿಸುವ ಕ್ರಮಕ್ಕೆ ಪ್ರಧಾನಿ ಆರ್ಥಿಕ ಸಲಹಾ ಸಮಿತಿ (ಪಿಎಂಇಎಸಿ) ಅಧ್ಯಕ್ಷ ಸಿ.ರಂಗರಾಜನ್ ವಿರೋಧ ವ್ಯಕ್ತಪಡಿಸಿದ್ದಾರೆ.
‘ಆರ್ಥಿಕ ಸ್ಥಿರತೆಗೆ ಹಣಕಾಸು ನಿಯಂತ್ರಣ ವ್ಯವಸ್ಥೆ ಇರಬೇಕು. ಆದರೆ, ಎಲ್ಲೆ ಮೀರಿದ ನಿಯಂ-ತ್ರಣದಿಂದ ಹೊಸ ಹಣಕಾಸು ಆವಿಷ್ಕಾರಗಳನ್ನು ತಡೆಹಿಡಿದಂತಾಗುತ್ತದೆ’ ಎಂದು ಅವರು ಸೋಮವಾರ ಇಲ್ಲಿ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಆಯೋಜಿಸಿದ್ದ ‘ಬ್ಯಾಂಕಿಂಗ್ ಸಮ್ಮೇಳನ’ದಲ್ಲಿ ಅಭಿಪ್ರಾಯಪಟ್ಟರು.
‘ಹಣಕಾಸು ಮಾರುಕಟ್ಟೆ ಆವಿಷ್ಕಾರ ಗಳು ಮತ್ತು ಹಣಕಾಸು ನಿಯಂತ್ರಣ ವ್ಯವಸ್ಥೆ ಒಂದಕ್ಕೊಂದು ಪೂರಕವಾಗಿ, ಸಮತೋಲನದಿಂದ ಕಾರ್ಯನಿರ್ವಹಿಸಬೇಕು. ಇದರಿಂದ ಆರ್ಥಿಕ ಸ್ಥಿರತೆ ಮತ್ತು ಪ್ರಗತಿ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ನೀತಿ ನಿರೂಪಕರು ಸದ್ಯದ ಅಂತರರಾಷ್ಟ್ರೀಯ ಬಿಕ್ಕಟ್ಟಿನಿಂದ ಹೊಸ ಪಾಠಗಳನ್ನು ಕಲಿಯಬಹುದು’ ಎಂದು ಅವರು ಹೇಳಿದರು.
ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ‘ಆರ್ಬಿಐ’ ನಿಯಂತ್ರಣ ಹೇರುವುದ ರಿಂದ ಸ್ಪರ್ಧಾತ್ಮಕತೆ ಹೆಚ್ಚುತ್ತದೆ, ಗ್ರಾಹ ಕರಿಗೆ ಕಡಿಮೆ ದರದಲ್ಲಿ ಸೇವೆಗಳು ಲಭಿಸುತ್ತವೆ. ಬ್ಯಾಂಕುಗಳು ಸಹ ಸಂಪತ್ತು ನಿರ್ವಹಣೆಗೆ ಹೆಚ್ಚಿನ ಗಮನ ಹರಿಸ ಬೇಕು’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.