ADVERTISEMENT

ಟೆಂಪೊ ಉರುಳಿ 10 ಸಾವು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2012, 19:30 IST
Last Updated 9 ಫೆಬ್ರುವರಿ 2012, 19:30 IST

ಹಲಗೂರು (ಮಂಡ್ಯ): ಸಮೀಪದ ಬಸವನಹಳ್ಳಿಯ ಬಸವನ ಬೆಟ್ಟದ ಕಡಿದಾದ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೊ ಉರುಳಿದ್ದರಿಂದ ಬಾಲಕಿ ಸೇರಿ 10 ಮಂದಿ ಮೃತಪಟ್ಟು 20ಕ್ಕೂ ಹೆಚ್ಚು ಜನ ಗಂಭೀರ ಗಾಯಗೊಂಡ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಹಲಗೂರಿನ ಮಹದೇಶ್ವರಸ್ವಾಮಿ ಶಾಮಿಯಾನ ಸೆಂಟರ್ ಮಾಲೀಕ ಮಹದೇವಸ್ವಾಮಿ ಪುತ್ರಿ ಸುರಭಿ (5), ಶಿವಸ್ವಾಮಿ ಪತ್ನಿ ಭಾಗ್ಯಮ್ಮ (55) ಕೃಷ್ಣ ಪತ್ನಿ ರೂಪಾ (35) ತಲಕಾಡು ಗ್ರಾಮದ ಪ್ರೇಮಾ (75) ಹಲಗೂರು ಮೂಲದ ಚಾಮರಾಜನಗರ ನಿವಾಸಿ ಎಚ್.ಬಿ.ಬಸವರಾಜು (72) ಸ್ಥಳದಲ್ಲಿಯೇ ಮೃತಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.