ಶಿವಮೊಗ್ಗ: ನಕಲಿ ಉತ್ತರಪತ್ರಿಕೆ ಹಾಗೂ ಅಂಕಪಟ್ಟಿ ಜಾಲದಲ್ಲಿ ಭಾಗಿಯಾಗಿದ್ದ ನಾಲ್ವರು ನೌಕರರನ್ನು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಎ. ಬಾರಿ ಅಮಾನತುಗೊಳಿಸಿದ್ದಾರೆ.
ಶಿವಕುಮಾರ್, ದೂದ್ಯನಾಯ್ಕ, ರಾಮು ಹಾಗೂ ಸಿದ್ದಾಚಾರ್ರನ್ನು ಬುಧವಾರ ಸೇವೆಯಿಂದ ಅಮಾನತುಗೊಳಿಸಿದ್ದು, ಉಳಿದಿಬ್ಬರು ಹೊರಗುತ್ತಿಗೆ ನೌಕರರನ್ನು ಕೈ ಬಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಂಗಳವಾರ ನ್ಯಾಯಾಧೀಶರ ಮುಂದೆ ಬಂಧಿತ 6 ಜನರನ್ನು ಹಾಜರುಪಡಿಸಿದ ಪೊಲೀಸರು, ತನಿಖೆಗಾಗಿ ಆರೋಪಿಗಳನ್ನು 14 ದಿವಸ ತಮ್ಮ ವಶಕ್ಕೆ ಪಡೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.