ಹುಬ್ಬಳ್ಳಿ: ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಚಿಕ್ಕಜಾಜೂರು ಹಾಗೂ ರಾಯದುರ್ಗ ಮಧ್ಯೆ ಸಬ್ವೇ ನಿರ್ಮಾಣ ಕಾಮಗಾರಿ ಕಾರಣ ಇದೇ 19ರಂದು ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದು ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಗುಂತಕಲ್-ಚಿಕ್ಕಜಾಜೂರು-ಗುಂತಕಲ್ ಮಧ್ಯೆ ಸಂಚರಿಸುವ ರೈಲು (57452/57451), ಹರಿಹರ-ಚಿತ್ರದುರ್ಗ ಪ್ಯಾಸೆಂಜರ್ (56518), ಚಿತ್ರದುರ್ಗ-ಬೆಂಗಳೂರು ಪ್ಯಾಸೆಂಜರ್ (56520) ರೈಲುಗಳ ಸಂಚಾರ ಅಂದು ಮೊಟಕುಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.