ADVERTISEMENT

ನೀರಿಲ್ಲದೆ ಮೀನುಗಳ ಸಾವು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2012, 19:30 IST
Last Updated 13 ಏಪ್ರಿಲ್ 2012, 19:30 IST
ನೀರಿಲ್ಲದೆ ಮೀನುಗಳ ಸಾವು
ನೀರಿಲ್ಲದೆ ಮೀನುಗಳ ಸಾವು   

ರಾಯಚೂರು: ಮಳೆ ಕೊರತೆ, ಕೆರೆಯಲ್ಲಿ ನೀರು ಕಡಿಮೆ ಆಗುತ್ತಿರುವುದರಿಂದ ರಾಯಚೂರು ತಾಲ್ಲೂಕಿನ ಮರ್ಚಡ್ ಗ್ರಾಮದ 410 ಎಕರೆ ವಿಸ್ತೀರ್ಣದ ಬೃಹತ್ ಕೆರೆಯಲ್ಲಿನ ಸಾವಿರಾರು ಮೀನುಗಳು ನಿತ್ಯ ಸಾವನ್ನಪ್ಪುತ್ತಿವೆ.

ನೀರು ಕಡಿಮೆ ಆಗಿರುವುದರಿಂದ ಇರುವ ನೀರೂ ಕೊಳಚೆಯಾಗಿ ದುರ್ವಾಸನೆ ಬೀರುತ್ತಿದೆ. ಕೆರೆ ದಂಡೆಯಲ್ಲಿ ಸತ್ತ ಮೀನುಗಳು ಎಲ್ಲೆಂದರಲ್ಲಿ ಬಿದ್ದಿವೆ. ಕೆರೆಯಿಂದ ಹೊರಗಡೆ ಹೊಲಕ್ಕೆ ನೀರು ಬಿಡುವ ನಾಲಾ ಮೂಲಕ ಹೋಗುವ ನೀರಿನಲ್ಲೂ ಸತ್ತ ಮೀನುಗಳು ಹೋಗುತ್ತಿವೆ. ದೊಡ್ಡ ಗಾತ್ರದ ಮೀನುಗಳು ಸಾವನ್ನಪ್ಪಿವೆ.
 
ಚಿಕ್ಕ ಮೀನುಗಳೂ ಸಾವನ್ನಪ್ಪುತ್ತಿರುವುದು ಕಂಡು ಬರುತ್ತಿದೆ. ಕೆರೆಯಲ್ಲಿ ನೀರು ಕಡಿಮೆ ಆಗಿರುವುದರಿಂದ ಬರೀ ಕೊಕ್ಕರೆಗಳೇ ನಡೆದುಕೊಂಡು ಸಾಗುತ್ತಿವೆ. ಅವುಗಳಿಗೆ ಈ ಸತ್ತ ಮೀನುಗಳು, ಸಾಯುತ್ತಿರುವ ಮೀನುಗಳೇ ಆಹಾರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.