ADVERTISEMENT

5.91 ಲಕ್ಷ ರೂ ದರೋಡೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 19:30 IST
Last Updated 13 ಸೆಪ್ಟೆಂಬರ್ 2011, 19:30 IST

ಶಹಾಬಾದ: ಇಲ್ಲಿನ ರೈಲ್ವೆ ನಿಲ್ದಾಣದ ಬಳಿಯ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್‌ನ ಎ.ಟಿ.ಎಂ.ನಿಂದ ಮಂಗಳವಾರ ನಸುಕಿನ ಜಾವದಲ್ಲಿ ಸುಮಾರು 5.91 ಲಕ್ಷ ರೂಪಾಯಿ  ದರೋಡೆ ನಡೆದ ಘಟನೆ ಜರುಗಿದೆ.

ದುಷ್ಕರ್ಮಿಗಳು ಎ.ಟಿ.ಎಂ. ಯಂತ್ರವನ್ನು ಒಡೆದು ಹಣ ಕದ್ದಿದ್ದಾರೆ. ಬೆಳಿಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಈ ವಿಷಯ ಗೊತ್ತಾಗಿ ತಕ್ಷಣವೆ ವಾಡಿ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ.  ರೈಲ್ವೆ ನಿಲ್ದಾಣದ ಬಳಿ ಸದಾಕಾಲ ಜನಜಂಗುಳಿ ಇರುತ್ತದೆ.

ಆದರೂ ಈ ದರೋಡೆ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ಕೆಲ ತಿಂಗಳ ಹಿಂದೆ ಎ.ಟಿ.ಎಂ. ಗಾಜು ಒಡೆದು ವಿಕಾರಗೊಳಿಸಲಾಗಿತ್ತು.

ಎಟಿಎಂಒಳಗಡೆ ಬೀಡಿ, ಸಿಗರೇಟು ಸೇದುವುದು, ಗುಟಕಾ ತಿಂದು ಉಗುಳುವ ಚಟುವಟಿಕೆಗಳು ನಡೆದಿದ್ದರೂ ಭದ್ರತಾ ಸಿಬ್ಬಂದಿಯನ್ನು ನೇಮಿಸಿರಲಿಲ್ಲ. ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.