ADVERTISEMENT

ಡಿಸಿಸಿ ಬ್ಯಾಂಕ್: ಕಾಂಗ್ರೆಸ್ ಬೆಂಬಲಿಗರ ತೆಕ್ಕೆಗೆ

ಸರನಾಯಕ ಅಧ್ಯಕ್ಷ, ಕಡ್ಲಿಮಟ್ಟಿ ಉಪಾಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 21:30 IST
Last Updated 27 ನವೆಂಬರ್ 2020, 21:30 IST

ಬಾಗಲಕೋಟೆ: ಇಲ್ಲಿನ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ಆಡಳಿತ ಮತ್ತೆ ಕಾಂಗ್ರೆಸ್ ಬೆಂಬಲಿಗರ ನಿರ್ದೇಶಕರ ತೆಕ್ಕೆಗೆ ಮರಳಿದೆ. ಮಾಜಿ ಸಚಿವ ಅಜಯಕುಮಾರ ಸರನಾಯಕ ಸತತ ಮೂರನೇ ಅವಧಿಗೆ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಮುರುಗೇಶ ಕಡ್ಲಿಮಟ್ಟಿ ಆಯ್ಕೆಯಾದರು.

ಚುನಾವಣೆಯಲ್ಲಿ ಅಜಯಕುಮಾರ ಸರನಾಯಕ ಪ್ರತಿಸ್ಪರ್ಧಿ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಕುಮಾರಗೌಡ ಜನಾಲಿ ವಿರುದ್ಧ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮುರುಗೇಶ ಕಡ್ಡಿಮಟ್ಟಿ ಅವರು ಪ್ರಕಾಶ ತಪಶೆಟ್ಟಿ ವಿರುದ್ಧ 8-6 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಬ್ಯಾಂಕ್‌ನ ನಿರ್ದೇಶಕ ಮಂಡಳಿಯ 13 ಮಂದಿ ಪೈಕಿ ಏಳು ಮಂದಿ ಬಿಜೆಪಿ ಬೆಂಬಲಿಗರು ಇದ್ದರೂ ಅಡ್ಡ ಮತದಾನದ ಪರಿಣಾಮ ಕಾಂಗ್ರೆಸ್ ಬೆಂಬಲಿಗರಿಗೆ ಗೆಲುವಿನ ಹಾದಿ ಸುಗಮವಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.