ಕೂಡ್ಲಿಗಿ: ತಾಲ್ಲೂಕಿನ ಇಬ್ಬರು ಶಿಕ್ಷಕಿಯರು ದೀರ್ಘಕಾಲ ಗೈರು ಹಾಜರಾದ ಹಿನ್ನೆಲೆಯಲ್ಲಿ ಇಬ್ಬರು ಶಿಕ್ಷಕಿಯರನ್ನು ಅಮಾನತು ಮಾಡಲಾಗಿದೆ.
ತಾಲ್ಲೂಕಿನ ಗೋವಿಂದಗಿರಿ ತಾಂಡದ ಸರ್ಕಾರಿ ಹಿ.ಪ್ರಾ.ಶಾಲೆಯ ಜೆ.ಕೆ.ಶೋಭಾ ಎಂಬ ಶಿಕ್ಷಕಿ 2011ರ ಜುಲೈ 1ರಿಂದ ಶಾಲೆಗೆ ಅನಧಿಕೃತ ಗೈರು ಹಾಜರಾಗಿರುತ್ತಾರೆ.
ಚಿಕ್ಕಜೋಗಿಹಳ್ಳಿ ತಾಂಡದ ವಿ.ಕೆ. ಸುವರ್ಣ ಎಂಬ ಶಿಕ್ಷಕಿ 2009ರಿಂದ ಕೆಲವು ದಿನಗಳವರೆಗೆ ಹಾಗೂ 2010ರಿಂದ 2012 ಫೆಬ್ರುವರಿ 27ರವರೆಗೆ ಶಾಲೆಗೆ ಅನಧಿಕೃತ ಗೈರು ಹಾಜರಾಗಿರುತ್ತಾರೆ.
ಈ ಕುರಿತು ಇಬ್ಬರು ಶಿಕ್ಷಕಯರಿಗೂ ನೋಟೀಸ್ಗಳನ್ನು ಕಳಿಸಿದ್ದರೂ, ದೂರವಾಣಿಯ ಮೂಲಕ ತಿಳಿಸಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲವಾದ್ದರಿಂದ ಕೆಸಿಎಸ್ಆರ್ ನಿಯಮಾವಳಿಗಳ ಪ್ರಕಾರ ಇವರನ್ನು ಅಮಾನತುಗೊಳಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಮಲ್ಲಿಕಾರ್ಜುನ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.