ADVERTISEMENT

‘ಜಾನಪದ ಕಲೆಗಳಿಗೆ ಮರುಜೀವ ಅಗತ್ಯ’

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 6:25 IST
Last Updated 2 ಏಪ್ರಿಲ್ 2018, 6:25 IST

ಹೂವಿನಹಡಗಲಿ: ‘ಅಳಿವಿನ ಅಂಚಿನಲ್ಲಿರುವ ಜಾನಪದ ಕಲಾ ಪ್ರಕಾರಗಳನ್ನು ಉಳಿಸಿ, ಬೆಳೆಸುವ ಮೂಲಕ ಅವುಗಳಿಗೆ ಮರುಜೀವ ನೀಡಬೇಕಿದೆ’ ಎಂದು ಯುವ ಮುಖಂಡ ಪತ್ರೇಶ್ ಹಿರೇಮಠ ನುಡಿದರು.ತಾಲ್ಲೂಕಿನ ಅಂಗೂರು ಗ್ರಾಮದ ಆಂಜನೇಯ ಬಯಲು ವೇದಿಕೆಯಲ್ಲಿ ಚಂದ್ರಶೇಖರ ಕಲಾ ಬಳಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಕಲಾವಿದ ಕೆ.ಸಿ.ಪರಶುರಾಂ ಅಂಗೂರು ಮಾತನಾಡಿದರು. ಮುಖಂಡ ಬಿ.ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದ್ದರು. ದಾದಾಪೀರ್, ಹುಸೇನವುಲ್ಲಾ, ಯೋಧ ಗಂಜಿ ಪರಶುರಾಮ, ಕೆ.ಮುರುಗೇಶ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT