ಹೊಸಪೇಟೆ: ಇಲ್ಲಿನ 12ನೇ ವಾರ್ಡ್ನಲ್ಲಿ ಭಾನುವಾರ ಅಹಿಂದ ಯುವ ವೇದಿಕೆಯ ನೂತನ ಘಟಕವನ್ನು ರಚಿಸಿ, ಪಿ. ಖಾಜಾ ಹುಸೇನ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ನಗರಸಭೆ ಸದಸ್ಯ ರೌಫ್ ಮಾತನಾಡಿ, ‘ಅಹಿಂದ ವೇದಿಕೆ ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಸಮಾಜದ ಏಳಿಗೆಗೆ ಅವಿರತ ಶ್ರಮಿಸಬೇಕು’ ಎಂದರು. ಕೆ. ಗೌಸ್ ಮಾತನಾಡಿ, ‘ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗಿ ವೇದಿಕೆಯನ್ನು ಬಲಿಕೊಡಬಾರದು’ ಎಂದು ತಿಳಿಸಿದರು. ವೇದಿಕೆ ತಾಲ್ಲೂಕು ಅಧ್ಯಕ್ಷ ಕುಬೇರ ದಲ್ಲಾಲಿ, ಪ್ರಮುಖರಾದ ಚೇತನರಾಜ್, ಶಫಿ ಬರಕಾತಿ, ರಘುನಂದನ, ಟಿ. ಜಂಬಯ್ಯ, ಬದ್ರಿನಾಥ, ಬಾಷಾ, ಕೆ.ರವಿ, ಪಿ. ಬಸವರಾಜ, ಎಚ್. ಪಂಪಾ, ಸಿ. ಕೊಟ್ರೇಶ್, ಡಿ. ರಾಮಚಂದ್ರ ಇದ್ದರು.
ಪದಾಧಿಕಾರಿಗಳ ವಿವರ ಇಂತಿದೆ: ಡಿ.ವಲಿ (ಗೌರವಾಧ್ಯಕ್ಷ), ರಘು (ಪ್ರಧಾನ ಕಾರ್ಯದರ್ಶಿ) ಪಿ.ಕೆ.ರೆಹಮಾನ್, ಎಂ.ಜಾಕೀರ್, ಡಿ. ನಜೀರ್ (ಉಪಾಧ್ಯಕ್ಷರು),ಆಮದ್ ಹಾಗೂ ಶರ್ಮಾಸ್ (ಸಂಘಟನಾ ಕಾರ್ಯದರ್ಶಿ), ಟಿ ಮೈಲಾ, ಹೊನ್ನೂರು, ಡಿ.ಮೋಹಿದ್ದೀನ್, ಡಿ.ರಾಜು, ಟಿ.ವಿಜಯಕುಮಾರ್, ಡಿ ಜಾಫರ್, ಪಿ.ಮೆಹಬೂಬ್ ,ಹುಸೇನ್ ಬೀ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.