ADVERTISEMENT

ಮೊಬೈಲ್‌ ಟವರ್‌ ಸ್ಥಳಾಂತರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಮೇ 2019, 13:48 IST
Last Updated 17 ಮೇ 2019, 13:48 IST
ಹೊಸಪೇಟೆಯ ಇಂದಿರಾ ನಗರದಲ್ಲಿನ ಮೊಬೈಲ್‌ ಟವರ್‌
ಹೊಸಪೇಟೆಯ ಇಂದಿರಾ ನಗರದಲ್ಲಿನ ಮೊಬೈಲ್‌ ಟವರ್‌   

ಹೊಸಪೇಟೆ: ಇಲ್ಲಿನ ಇಂದಿರಾ ನಗರದ ತುಂಗಭದ್ರಾ ಸ್ಟೀಲ್ಸ್‌ ಪ್ರಾಡಕ್ಟ್ಸ್‌ (ಟಿ.ಎಸ್‌.ಪಿ.) ಎದುರಿನ ಮೊಬೈಲ್‌ ಟವರ್‌ ಬೇರೆಡೆ ಸ್ಥಳಾಂತರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಸಂಬಂಧ ಅವರು ಟಿ.ಬಿ. ಡ್ಯಾಂ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ಗೆ ಪತ್ರ ಬರೆದಿದ್ದಾರೆ.

‘ಮೊಬೈಲ್‌ ಟವರ್‌ನ ತರಂಗಗಳಿಂದ ಸ್ಥಳೀಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅದರಲ್ಲೂ ಗರ್ಭೀಣಿಯರು, ಮಕ್ಕಳು ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ.ನಿತ್ಯ ಅನೇಕ ಪಕ್ಷಿಗಳು, ಮಂಗಗಳು ಸಾವನ್ನಪ್ಪುತ್ತಿವೆ. ಇತ್ತೀಚೆಗೆ ಟವರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಸ್ಥಳೀಯರ ಸುರಕ್ಷತೆಯ ದೃಷ್ಟಿಯಿಂದ ಕೂಡಲೇ ಅದನ್ನು ಬೇರೆಡೆ ಸ್ಥಳಾಂತರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ಸ್ಥಳೀಯರಾದ ಅಶ್ವಿನಿ ರಮೇಶ್‌, ಡಿ. ಶಂಕರ್‌, ಗಣೇಶ್‌, ಮಣಿ ಸಹಿ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.