ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ತಾಲ್ಲೂಕು ಸಂಚಾಲಕ ಶಬ್ಬೀರ್ ಬಾಷಾ ಮಾತನಾಡಿ, ನರೇಗಾ ಅನುಷ್ಠಾನ ಸಂದರ್ಭದಲ್ಲಿ ಕೂಲಿ ಪರಿಹಾರ ಭತ್ಯೆ ಶೇ 5 ರಷ್ಟು ನಿಗದಿಗೊಳಿಸಿದ್ದು, 20 ವರ್ಷಗಳಾದರೂ ಪರಿಷ್ಕರಣೆಯಾಗಿಲ್ಲ. ಕೂಲಿ ಭತ್ಯೆಯನ್ನು ಶೇ 25ಕ್ಕೆ ಹೆಚ್ಚಿಸಬೇಕು. ವಿಭಕ್ತ ಕುಟುಂಬಗಳು ಹೊಸ ಉದ್ಯೋಗ ಚೀಟಿ ಪಡೆಯಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿಗಳಿಗೆ ಎಡಿಟ್ ಆಪ್ಷನ್ ನೀಡಬೇಕು ಎಂದು ಆಗ್ರಹಿಸಿದರು. ಗ್ರಾಕೂಸ ತಾಲ್ಲೂಕು ಪ್ರತಿನಿಧಿಗಳಾದ ಐನಳ್ಳಿ ಮಹಾಬಲೇಶ, ಈರಮ್ಮ, ಕೆ.ಎಂ.ಇಲಾಜ್, ವೈ.ಯಲ್ಲಮ್ಮ ಇತರರು ಇದ್ದರು.