ADVERTISEMENT

ಇಂದು, ನಾಳೆ ನೀರು ಪೂರೈಕೆ ಇಲ್ಲ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 3:28 IST
Last Updated 6 ಜುಲೈ 2021, 3:28 IST

ಹೊಸಪೇಟೆ (ವಿಜಯನಗರ): ನಗರದ 11ನೇ ಹಂತದ ಜಲಶುದ್ಧೀಕರಣ ಘಟಕದಲ್ಲಿ ದುರಸ್ತಿ ಕೆಲಸ ಕೈಗೆತ್ತಿಕೊಂಡಿದ್ದರಿಂದ ಮಂಗಳವಾರ, ಬುಧವಾರ (ಜು.6,7) ನಗರದ ಕೆಲ ಬಡಾವಣೆ ಹಾಗೂ ತಾಲ್ಲೂಕಿನ ಕೆಲವು ಹಳ್ಳಿಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಮೆಹಬೂಬ್ ನಗರ, ನೆಹರೂ ಕಾಲೊನಿ, ವಿವೇಕಾನಂದ ನಗರ, ಆಕಾಶವಾಣಿ, ಮೂರೂಗೇರಿ, ಜಗಳಕಟ್ಟೆ ಏರಿಯಾ, ಟಿ.ಬಿ. ಡ್ಯಾಂ, ಚಪ್ಪರದಹಳ್ಳಿ, ಕಾರಿಗನೂರು, ಅನಂತಶಯನಗುಡಿ, ತಾಲ್ಲೂಕಿನ ಕಾರಿಗನೂರು, ಸಂಕ್ಲಾಪುರ, ಕೊಂಡನಾಯಕನಹಳ್ಳಿಗೆ ನೀರು ಸರಬರಾಜು ಮಾಡುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕೆಂದು ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT