ADVERTISEMENT

ಹಂಪಿ: ಪ್ರವಾಸಿಗರ ಕಾರಿನ ಗಾಜು ಒಡೆದು ಕಳವು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 20:06 IST
Last Updated 21 ನವೆಂಬರ್ 2018, 20:06 IST

ಹೊಸಪೇಟೆ: ತಾಲ್ಲೂಕಿನ ಹಂಪಿ ನೆಲಸ್ತರ ಶಿವ ದೇವಾಲಯದ ಬಳಿ ಬುಧವಾರ ಸಂಜೆ ಪ್ರವಾಸಿಗರು ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಲ್ಯಾಪ್‌ಟಾಪ್‌, ಮೊಬೈಲ್‌ ಫೋನನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ.

‘ತರುಣ್‌ ಕುಮಾರ್‌ ಎಂಬುವರು ಹೈದರಾಬಾದ್‌ನಿಂದ ಹಂಪಿ ನೋಡಲು ಬಂದಿದ್ದರು. ನೆಲಸ್ತರ ಶಿವಾ ದೇವಾಲಯ ಸ್ಮಾರಕ ನೋಡಲು ಕಾರು ನಿಲ್ಲಿಸಿ ಹೋಗಿದ್ದರು. ಸ್ಮಾರಕ ನೋಡಿ ವಾಪಸ್‌ ಬಂದಾಗ ಕಾರಿನ ಗಾಜು ಒಡೆದು, ಅದರೊಳಗಿದ್ದ ಲ್ಯಾಪ್‌ಟಾಪ್‌, ಐಫೋನ್‌ ತೆಗೆದುಕೊಂಡು ಹೋಗಿದ್ದಾರೆ. ಈ ಕುರಿತು ಇನ್ನಷ್ಟೇ ಪ್ರಕರಣ ದಾಖಲಾಗಬೇಕಿದೆ’ ಎಂದು ಹಂಪಿ ಪೊಲೀಸ್‌ ಠಾಣೆಯ ಸಿಪಿಐ ಪಂಪಣ್ಣ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT