ADVERTISEMENT

ಕೃಷಿಹೊಂಡದಲ್ಲಿ‌ ಮುಳುಗಿ ಮೂವರು‌‌ ಬಾಲಕರ ಸಾವು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 4:56 IST
Last Updated 29 ಅಕ್ಟೋಬರ್ 2018, 4:56 IST

ಬಳ್ಳಾರಿ: ತಾಲೂಕಿನ ಕೊರ್ಲಗುಂದಿ ಗ್ರಾಮದಲ್ಲಿ ಭಾನುವಾರ ಸಂಜೆ ಕೃಷಿ ಹೊಂಡದಲ್ಲಿ ಮುಳುಗಿ ಮೂವರು ಬಾಲಕರು ಮೃತಪಟ್ಟರು.

ಹರ್ಷ (13 ವರ್ಷ), ಭರತ್ (11 ವರ್ಷ) ಹಾಗೂ ಎರ್ರಿಸ್ವಾಮಿ (13 ವರ್ಷ) ಮೃತರು.

ಹರ್ಷ ಹಾಗೂ ಭರತ್ ಒಂದೇ ಕುಟುಂಬದವರು. ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದಾಗ ದುರ್ಘಟನೆ ನಡೆಯಿತು.
ಭಾನುವಾರ ಮಧ್ಯರಾತ್ರಿ ಮೋಕಾ ಠಾಣೆಯಲ್ಲಿ ಪ್ರಕರಣ ದಾಖಲಾಯಿತು.

ADVERTISEMENT

ಸಚಿವರ ಭೇಟಿ: ನಗರದ ವಿಮ್ಸ್ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಬಾಲಕರ ಪೋಷಕರಿಗೆ ಸಾಂತ್ವನ‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.