ADVERTISEMENT

ಹರಿಕಥೆ ವಿದ್ವಾಂಸ ವಿ.ಕೃಷ್ಣಮೂರ್ತಿ ನಿಧನ

ನಿಧನವಾರ್ತೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 13:21 IST
Last Updated 12 ಸೆಪ್ಟೆಂಬರ್ 2020, 13:21 IST
ವಿ.ಕೃಷ್ಣಮೂರ್ತಿ
ವಿ.ಕೃಷ್ಣಮೂರ್ತಿ   

ದೊಡ್ಡಬಳ್ಳಾಪುರ: ಹರಿಕಥೆ ಮತ್ತು ನಾಟಕಗಳನ್ನು ನೂರಾರು ಮಂದಿಗೆ ಕಲಿಸಿದ್ದ, ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತ ಮುಖ್ಯಶಿಕ್ಷಕ ವಿ.ಕೃಷ್ಣಮೂರ್ತಿ (89) ಶುಕ್ರವಾರ ವಯೋ ಸಹಜ ಅನಾರೋಗ್ಯದಿಂದ ನಿಧನರಾದರು.

ಕಾಶಿ ವಿಶ್ವೇಶ್ವರ ದೇಗುಲದೊಂದಿಗೆ ಭಾವುಕ ನಂಟು ಹೊಂದಿದ್ದರು. ದೇಗುಲಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದರು. ಪುರೋಹಿತರು ಮತ್ತು ಭಜನೆ ಗುರುಗಳಾಗಿಯೂ ಜನಪ್ರಿಯರಾಗಿದ್ದರು.

ಆಕಾಶವಾಣಿ ಕಲಾವಿದರಾಗಿದ್ದ ಕೃಷ್ಣಮೂರ್ತಿ ಅವರು ಸಂಗೀತಗಾರರೂ ಹೌದು. ಪತ್ನಿ, ನಾಲ್ವರು ಪುತ್ರಿಯರು ಮತ್ತು ಓರ್ವ ಪುತ್ರ ಇದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.