ADVERTISEMENT

ಎಂ.ಟಿ.ಬಿಗೆ ಮಂತ್ರಿ ಸ್ಥಾನ ಸಿಗದಿದ್ದರೆ ಬೆಂಬಲಿಗರ ರಾಜೀನಾಮೆ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 2:53 IST
Last Updated 1 ಡಿಸೆಂಬರ್ 2020, 2:53 IST

ಹೊಸಕೋಟೆ: ಎಂಟಿಬಿ ನಾಗರಾಜ್‌ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ನಗರ ಸಭಾಧ್ಯಕ್ಷ ಅರುಣ್ ಕುಮಾರ್(ಹರಿ) ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಗ್ರಹಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ವಿನಾಕಾರಣ ವಿಳಂಬ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮಂತ್ರಿಸ್ಥಾನ ಸಿಗದಿದ್ದರೆ ತಾಲ್ಲೂಕಿನ ಎಲ್ಲ ಜನಪ್ರತಿನಿಧಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಲಿದ್ದಾರೆ ಎಂದು ಎಚ್ಚರಿಸಿದರು.

ಉಪಾಧ್ಯಕ್ಷೆ ಶೋಭ ಜುಂಜಪ್ಪ, ನಗರಸಭಾ ಸದಸ್ಯರಾದ ನವೀನ್ ಕುಮಾರ್, ನಿತಿನ್ ಶ್ರೀನಿವಾಸ್, ಬಿರಿಯಾನಿ ಆನಂದ್, ನಾಗರಾಜ್, ಟೌನ್ ಬ್ಯಾಂಕ್ ಸದಸ್ಯರಾದ ಜಿ.ಟಿ.ಮೋಹನ್, ಆಸಿಫ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.