ಹೊಸಕೋಟೆ: ತಾಲ್ಲೂಕಿನ ನಿಡಗಟ್ಟ ಗ್ರಾಮದ ಎಸ್ಆರ್ಇಎಸ್ ಪ್ರೌಢಶಾಲೆಯ 10 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಹತ್ತು ದಿನಗಳ ಹಿಂದೆ
ನಾಪತ್ತೆಯಾಗಿದ್ದಾರೆ.
ಅಭಿಷೇಕ್ ಸುಬ್ರಮಣಿ (16) ಮತ್ತು ರಾಮಾಂಜಿನಿ ದೇವರಾಜ (16) ಜುಲೈ 21ರಂದು ಮಧ್ಯಾಹ್ನ 2ಕ್ಕೆ ಮನೆಯಿಂದ ಬೈಕ್ನಲ್ಲಿ ಹೂ ಮಾರಲು ಹೊಸಕೋಟೆ ಹೂ ಮಾರುಕಟ್ಟೆಗೆ ಹೋದವರು ಇದುವರೆಗೂ ಹಿಂದಿರುಗಿಲ್ಲ. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಾಲಕರನ್ನು ಕಂಡವರು 9844454588 ಸಂಖ್ಯೆಗೆ ಮಾಹಿತಿ ನೀಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.