ದೊಡ್ಡಬಳ್ಳಾಪುರ:ಮನುಕುಲದ ಮೇಲ್ಮೈಗಾಗಿ ಯುವಜನತೆ ‘ಸನ್ನದ್ಧ’ ಸಂಘಟನೆಯ ವಾರ್ಷಿಕೋತ್ಸವ ಸಮಾರಂಭವು ಶ್ರೀದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಆರ್.ರವಿಕಿರಣ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ನಗರರದಲ್ಲಿನ ಕೆಲ ಯುವಕರು ಒಟ್ಟುಗೂಡಿ ಸಮಾಜದ ಪರವಾದ ನಿಲುವುಗಳ ಮೂಲಕ ಗುರುತಿಸಿಕೊಳ್ಳುತ್ತಿರುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಹೇಳಿದರು.
‘ನಿರಾಶ್ರಿತರು, ಅನಾಥ ಮಕ್ಕಳು, ವೃದ್ಧರು, ಪರಿಸರ ಸಂರಕ್ಷಣೆ, ಶಿಕ್ಷಣ, ಸೃಜನಶೀಲ ಚಟುವಟಿಕೆಗಳು ಸೇರಿದಂತೆ ಹಲವು ವಲಯಗಳಲ್ಲಿ ಒಂದು ವರ್ಷದಿಂದ ತೊಡಗಿಕೊಂಡಿರುವ ‘ಸನ್ನದ್ಧ’ ಸಂಸ್ಥೆ ಮತ್ತಷ್ಟು ರಚನಾತ್ಮಕ ಕಾರ್ಯಯೋಜನೆಗಳೊಂದಿಗೆ ಸಾಮಾಜಿಕ ಚಿಂತನೆಯನ್ನು ರೂಢಿಸಿಕೊಳ್ಳಲಿ’ ಎಂದು ಸಲಹೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಎನ್.ಶ್ರೀಭಾಸ್ಕರ್ ಮಾತನಾಡಿ, ‘ಸದಾಕಾಲ ಸಮಾಜದ ಯಾವುದೇ ನೆರವಿಗೆ ನಾವು ಸಿದ್ದ ಎಂಬ ಪರಿಕಲ್ಪನೆಯಲ್ಲಿ ನಿಯಮಿತ ಸಂಖ್ಯೆಯ ಸ್ನೇಹಿತರು ಜತೆಗೂಡಿ ರೂಪಿಸಿದ ಸಂಸ್ಥೆ. ಇಂದು ಹಲವು ಕಾರ್ಯಕ್ರಮಗಳ ಮೂಲಕ ಜನತೆಗೆ ಹತ್ತಿರವಾಗಿದೆ. ಸಾಮಾಜಿಕ ಪಿಡುಗುಗಳನ್ನು ನಿವಾರಿಸಿ ಸಶಕ್ತ ಸಮಾಜ ನಿರ್ಮಾಣ ಮಾಡುವುದು ಈ ತಂಡದ ಆದ್ಯತೆಯಾಗಿದೆ’ ಎಂದು ಹೇಳಿದರು.
ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಡಾ.ಎಂ.ಚಿಕ್ಕಣ್ಣ, ಸಾಂಸ್ಕೃತಿಕ ಸಂಚಾಲಕ ಸಿ.ಪಿ.ಪ್ರಕಾಶ್ ಮಾತನಾಡಿದರು. ವಿಭಾಗ ಮುಖ್ಯಸ್ಥೆ ಪಿ.ಚೈತ್ರ, ಐಕ್ಯೂಎಸಿ ಸಂಯೋಜಕ ಆರ್.ಉಮೇಶ್, ಸನ್ನದ್ಧ ಸಂಸ್ಥೆಯ ಪದಾಧಿಕಾರಿಗಳಾದ ಸುದರ್ಶನ್, ಸಾಯಿ ರಾಹುಲ್, ಪವನ್, ಬಿನಿತ್ಕುಮಾರ್ ಸಿಂಗ್, ಸಿಂಧು, ತೇಜಸ್ವಿನಿ, ಸ್ವಪ್ನ, ರಮ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.