ADVERTISEMENT

ಸಮೃದ್ಧಿಯ ಜೀವನಕ್ಕೆ ಧರ್ಮವೇ ತಳಹದಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 8:20 IST
Last Updated 22 ಆಗಸ್ಟ್ 2012, 8:20 IST

ಗೋಕಾಕ: ಸುಖ, ಶಾಂತಿ ಮತ್ತು ಸಮೃದ್ಧಿಯ ಜೀವನ ಬಯಸುವ ಜನತೆಗೆ ಧರ್ಮದ ನಡೆ-ನುಡಿಯೊಂದೇ ಸೂಕ್ತ ಪರಿಹಾರದ ಮಾರ್ಗವಾಗಿದೆ ಎಂದು ಧರ್ಮ ಚಿಂತಕ ಲಾಲ್‌ಹುಸೇನ ಕಂದಗಲ್ ನುಡಿದರು.

ಇತ್ತೀಚೆಗೆ ಜುಮ್ಮೋ ಮಸೀದಿ ಆವರಣದಲ್ಲಿ ಜರುಗಿದ ಇಫ್ತಾರ್ ಕೂಟದಲ್ಲಿ ಅವರು ಮಾತನಾಡಿದರು.
ಲೋಕಪಾಲ ಮತ್ತು ಜನಲೋಕ ಪಾಲದಿಂದ ಭ್ರಷ್ಟಾಚಾರ ಮುಕ್ತ ಸಮಾಜ ಮತ್ತು ವ್ಯವಸ್ಥೆ ನಿರ್ಮಿಸು ವುದು ಅಸಾಧ್ಯದ ಮಾತು. ಮೊದಲು ಜನರ ಆಚಾರ-ವಿಚಾರ ಮತ್ತು ಮನೋಭಾವನೆ  ಪರಿವರ್ತನೆ ಆಗಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು-ವಿಜಾಪುರ ಮಾನವ ಹಕ್ಕುಗಳ ಕಲ್ಯಾಣ ಸಮಿತಿ ಅಧ್ಯಕ್ಷ ಹಾಸಿಂಪೀರ್ ವಾಲೀಕಾರ ಮಾತನಾಡಿ, ಇಸ್ಲಾಂ ಧರ್ಮದ ಮೂಲ ತತ್ವವೇ ಸರ್ವಧರ್ಮಗಳನ್ನು ಪ್ರೀತಿಸುವುದಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಶೂನ್ಯ ಸಂಪಾದನಾ ಮಠದ ಮುರುಘ ರಾಜೇಂದ್ರ ಸ್ವಾಮೀಜಿ ಮಾತನಾಡಿ, ಧರ್ಮ, ಆಚಾರ- ವಿಚಾರದಿಂದ ನಡೆಯು ವವರಿಗೆ ಜನತೆ ಬೆಂಬಲ ನೀಡಿದಾಗ ಮಾತ್ರ ಒಳ್ಳೆಯ ಭವಿಷ್ಯವನ್ನು ಕಾಣಲು ಸಾಧ್ಯ ಎಂದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಧರ್ಮ ಸಮನ್ವಯತೆ ಎಲ್ಲರೂ ಮೂಡಿದಾಗ ಮಾತ್ರ ಪರಸ್ಪರ ಪ್ರೀತಿಯಿಂದ ಜೀವನ ಸಾಗಿಸುವುದು ಸಾಧ್ಯ ಎಂದು ಹೇಳಿದರು.

ಕೆ.ಎಲ್.ಇ. ನಿರ್ದೇಶಕ ಜಯಾನಂದ ಮುನವಳ್ಳಿ, ಬಸವಣ್ಣೆಪ್ಪ ಕಂಬಾರ, ಗುರುಸಿದ್ದಪ್ಪ ಕುರಬೇಟ, ಮಾಯಪ್ಪ ತಹಶೀಲ್ದಾರ, ರಾಜುಗೌಡ ನಿರ್ವಾಣಿ, ಆನಂದ ಗೋಟಡಕಿ, ಮಹಾಂತೇಶ ಮಠಪತಿ, ನಗರ ಸೇವಕ ಶ್ರೀಶೈಲ ಪೂಜಾರಿ, ಬಸವರಾಜ ಹುಳ್ಳೇರ, ಕಾಡಪ್ಪ ಪಾಟೀಲ, ಶ್ರೀಕಾಂತ ಮರಲಿಂಗನ್ನವರ, ಅರ್ಜುನ ಪವಾರ, ಹಾಜರಿದ್ದರು. ಸೈಯದ ಬಾಷಿತ್ ಅಲಿ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.