ADVERTISEMENT

16 ವರ್ಷಗಳ ನಂತರ ತುಂಬಿದ ಕೆರೆಗೆ ಬಾಗಿನ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 5:23 IST
Last Updated 25 ಅಕ್ಟೋಬರ್ 2017, 5:23 IST

ರಾಯಬಾಗ: ತಾಲ್ಲೂಕಿನ ಹುಲ್ಯಾಳ ಕೆರೆ 16 ವರ್ಷಗಳ ನಂತರ ತುಂಬಿದ್ದರಿಂದ ಸ್ಥಳೀಯ ವಸಂತರಾವ ಪಾಟೀಲ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪ್ರತಾಪರಾವ ಪಾಟೀಲ ಅವರು ಕೆರೆಗೆ ಬಾಗಿನ ಅರ್ಪಿಸಿದರು.

ನಂತರ ಮಾತನಾಡಿದ ಅವರು, ‘ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಕೆರೆ ತುಂಬಿದ್ದರಿಂದ ಪ್ರಸಕ್ತ ಸಾಲಿನ ನೀರಿನ ಸಮಸ್ಯೆ ಇಲ್ಲದಂತಾಗುತ್ತದೆ’ ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹಾದೇವ ಕೊಕಾಟೆ, ಕಲ್ಲಪ್ಪ ಹಳಿಂಗಳೆ, ಪಟ್ಟಣ ಪಂಚಾಯ್ತಿ ಸದಸ್ಯರಾದ ಚಂದ್ರಕಾಂತ ಕೋರೆ, ಬಿ.ಎಸ್. ಗಡ್ಡೆ, ರಾಜು ಪೂಜೇರಿ, ಜಾವೇದ್‌ ಮೋಮಿನ್‌, ರವಿ ತರಾಳ, ಬೀರಪ್ಪ ಕುರಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.