ADVERTISEMENT

ಬೈಕುಗಳ ಡಿಕ್ಕಿ: ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 15:42 IST
Last Updated 18 ಆಗಸ್ಟ್ 2022, 15:42 IST
   

ಹುಕ್ಕೇರಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಶಿರಢಾಣ ಕ್ರಾಸ್ ಮತ್ತು ಬೆಲ್ಲದ ಬಾಗೇವಾಡಿ ರಸ್ತೆಯ ಮೇಲೆ ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ಶಂಕರ ಸಿದ್ದಪ್ಪ ಬಿದರೊಳ್ಳಿ (24) ಮತ್ತು ರಾಯಭಾಗ ತಾಲ್ಲೂಕಿನ ಹಿಡಕಲ್ ಗ್ರಾಮದ ಉಮೇಶ ಈರಪ್ಪ ಸತ್ತಿ (23) ಮೃತಪಟ್ಟವರು.

ಬೆಲ್ಲದ ಬಾಗೇವಾಡಿಯಿಂದ ಶಿರಢಾಣ ಕ್ರಾಸ್ ಕಡೆಗೆ ಹೊರಟಿದ್ದ ಶಂಕರ್ ಸಿದ್ದಪ್ಪ ಬಿದರೊಳ್ಳಿ ಮತ್ತು ಶಿರಢಾಣ್ ಕ್ರಾಸ್‌ನಿಂದ ಬೆಲ್ಲದ ಬಾಗೇವಾಡಿ ಕಡೆಗೆ ಹೊರಟಿದ್ದ ಉಮೇಶ್ ಈರಪ್ಪ ಸತ್ತಿ ಅವರ ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಶಂಕರನ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಬೆಲ್ಲದ ಬಾಗೇವಾಡಿಯ ಪ್ರಮೋದ ತಳವಾರ(22) ಗೆ ತಲೆ ಮತ್ತು ಕೈಕಾಲಿಗೆ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಹುಕ್ಕೇರಿ ಪೊಲೀಸ್ ಇನ್‌ಸ್ಪೆಕ್ಟರ್ ಮಹಮ್ಮದ ರಫೀಕ್ ತಹಸೀಲ್ದಾರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.