ADVERTISEMENT

ಚಾಕು ಇರಿದು ಸಹೋದರನ ಕೊಲೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 16:28 IST
Last Updated 25 ಜನವರಿ 2023, 16:28 IST

ಗೋಕಾಕ: ಇಲ್ಲಿನ ವಾಲ್ಮೀಕಿ ನಗರದ ಮನೆಯೊಂದರಲ್ಲಿ ಮಂಗಳವಾರ ರಾತ್ರಿ ಕುಡಿದ ಮತ್ತಿನಲ್ಲಿ ನಡೆದ ಜಗಳದಲ್ಲಿ ಚಾಕು ಇರಿದು ಯುವಕನ ಕೊಲೆ ಮಾಡಲಾಗಿದೆ.

ನಗರದ ನಿವಾಸಿ ತಿಲಕ (24) ಕೊಲೆ ಆರೋಪಿ. ಈತನ ಸಹೋದರ ಸಂಬಂಧಿ ಚೇತನ್ ಕೊಲೆಯಾದವರು.

ಮಂಗಳವಾರ ರಾತ್ರಿ ಇಬ್ಬರೂ ಪಾರ್ಟಿ ಮಾಡಿ ಮಧ್ಯ ಸೇವಿಸಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಯಿತು. ಇದು ವಿಕೋಪಕ್ಕೆ ತಿರುಗಿತು. ಅಡುಗೆ ಮನೆಯಲ್ಲಿದ್ದ ಚಾಕು ಎತ್ತಿಕೊಂಡು ಬಂದ ತಿಲಕನು ಚೇತನ್ ಹೊಟ್ಟೆ ಹಾಗೂ ಇತರ ಭಾಗಗಳಿಗೆ ಇರಿದ. ತೀವ್ರ ರಕ್ತಸ್ರಾವದಿಂದ ಚೇತನ್ ಕೊನೆಯುಸಿರೆಳೆದ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.