ADVERTISEMENT

ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಿ: ಸಂತೋಷ್ ಪಾಟೀಲ್ ಅತ್ತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 13:50 IST
Last Updated 12 ಏಪ್ರಿಲ್ 2022, 13:50 IST
   

ಬೆಳಗಾವಿ: ‘ಸಂತೋಷ್ ಪಾಟೀಲ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ. ಅವರ ಸಾವಿನ ಹಿಂದೆ ಅನುಮಾನಗಳಿವೆ. ಸರಿಯಾಗಿ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು’ ಎಂದು ಸಂತೋಷ್ ಪಾಟೀಲ್ ಅಣ್ಣನ ಪತ್ನಿ ಗಂಗಾ ಒತ್ತಾಯಿಸಿದರು.

ತಾಲ್ಲೂಕಿನ ಬಡಸ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಾಲಸೋಲ ಮಾಡಿ ಗುತ್ತಿಗೆ ಕೆಲಸ ಮಾಡಿದ್ದರು. ಸಂತೋಷ್ ಯಾರು ಎಂದು ಈಶ್ವರಪ್ಪ ಕೇಳಿದ್ದಾರೆ. ಹಾಗಾದರೆ ಅವರ ಜೊತೆಗಿರುವ ಫೋಟೊಗಳು ಹೇಗೆ ಬಂದವು? ಅವರು ಹೇಳಿದ ಮೇಲೆಯೇ ಇವರು ಕೆಲಸ ಮಾಡಿದ್ದಾರೆ. ಸಂತೋಷ್ ಪತ್ನಿ, ಮಗುವಿಗೆ ನ್ಯಾಯ ಕೊಡಿಸಬೇಕು’ ಎಂದರು.

ಸಂತೋಷ್ ಹುಟ್ಟೂರು ಬಡಸದಲ್ಲಿ ‘ಕನಸು’ ಹೆಸರಿನ ಮನೆ ಕಟ್ಟಿಸಿದ್ದಾರೆ. ಮೇನಲ್ಲಿ ಗೃಹಪ್ರವೇಶಕ್ಕೆ ಯೋಜಿಸಿದ್ದರು. ಆದರೆ, ಅದು ಕೈಗೂಡಲಿಲ್ಲ ಎಂದು ಸ್ಥಳೀಯರು ನೊಂದುಕೊಂಡರು.

ADVERTISEMENT

ಇವುಗಳನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.